ಶ್ರಿ ಚೆಲುವಾಂಬಿಕಾ ಪಿಕ್ಚರ್ಸ್ ಲಾಂಛನದಲ್ಲಿ ಕಲಾಸಾಮ್ರಾಟ್ ಎಸ್. ನಾರಾಯಣ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೀರ ಪರಂಪರೆ ಚಿತ್ರದ ಚಿತ್ರೀಕರಣ ಭಾಗಶಃ ಪೂರ್ಣಗೊಂಡಿದೆ. ಕಳೆದವಾರದಿಂದ ಶ್ರೀ ಚಾಮುಂಡೇಶ್ವರಿ ಧ್ವನಿಗ್ರಹಣ ಕೇಂದ್ರದಲ್ಲಿ ಮಾತುಗಳ ಮರುಲೇಪನ ಕಾರ್ಯ ಕೂಡ ಪ್ರಾರಂಭವಾಗಿದೆ. ಸುದೀಪ್-ಐಂದ್ರಿತಾರೇ ಅಭಿನಯದ ಡ್ಯುಯಟ್ ಹಾಡೊಂದರ ಚಿತ್ರೀಕರಣ ಹಾಗೂ ಅಂಬರೀಶ್ ಅಭಿನಯದ ೩ ದಿನಗಳ ಚಿತ್ರಣ ಮಾತ್ರ ಬಾಕಿ ಇದೆ. ಅದನ್ನು ಮಂಡ್ಯ ಹಾಗೂ ಮೈಸೂರಿನಲ್ಲಿ ಸಧ್ಯದಲ್ಲೇ ಚಿತ್ರಿಸಲಾಗುವುದು. ಅಲ್ಲದೆ ಹಾಡನ್ನು ವಿದೇಶದಲ್ಲಿ ಶೂಟ್ ಮಾಡಬೇಕಾಗಿದೆ. ಸುಮಾರು ೬೮ ದಿನಾಳ ಕಾಲ ಗೋಕಾಕ್ ಹಾಗೂ ಗುಲ್ಬರ್ಗದ ಉರಿ ಬಿಸಿಲನ್ನು ಲೆಕ್ಕಿಸದೆ, ನಿರ್ದೇಶಕರ ಮೇಲಿನ ಪ್ರೀತಿಯಿಂದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರೀಕರಣದಲ್ಲಿ ಪಾಲ್ಗೊಂಡು ಯಶಸ್ವಿಯಾಗಿಸಿದ್ದಾರೆ. ಕೊಳ್ಳೇಗಾಲದಲ್ಲಿ ಕೂಡ ಹಾಡು ಹಾಗು ಮಾತಿನ ಭಾಗದ ಚಿತ್ರಣ ನಡೆದಿದೆ. ಎಸ್. ನಾರಾಯಣ ನಿರ್ದೇಶನದ ೧೭ನೇ ಚಿತ್ರ ಇದಾಗಿದ್ದು, ಇವರೇ ಕಥೆ-ಚಿತ್ರಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಗ್ರಾಮದ ತಂದೆಯಾದ ಅಂಬರೀಶರನ್ನು (ವರದೇಗೌಡ) ದುಷ್ಟರಿಂದ ರಕ್ಷಿಸುವ ತೇಜನ ಪಾತ್ರದಲ್ಲಿ ಸುದೀಪ್ ಅತ್ಯಮೋಘ ಅಭಿನಯ ನೀಡಿದ್ದಾರೆ. ಅಂಬರೀಶ್ ಪತ್ನಿಯಾಗಿ ವಿಜಯಲಕ್ಷ್ಮಿ ಸಿಂಗ್ ಹಾಗೂ ಸುದೀಫ್ ಜೋಡಿಯಾಗಿ ಐಂದ್ರಿತರೇ ಪ್ರಥಮಬಾರಿಗೆ ಕಾಣಿಸಿಕೊಳ್ಳುತ್ತಿದ್ದು, ಹಾಸ್ಯನಟನಾಗಿ ಶರಣ್, ಖಳನಾಯಕನಾಗಿ ಸುದೀಪ್ಧೋ ಅಭಿನಯಿಸಿ ದ್ದಾರೆ. ಆರ್. ಗಿರಿಯವರ ಛಾಯಾಗ್ರಹಣ, ಹರಿಕೃಷ್ಣರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.